ಗ್ರಾಮೀಣ ಶಾಲಾ ದತ್ತು ಯೋಜನೆ

ಕೂಡಲಿ ಗ್ರಾಮದಲ್ಲಿರುವ ಸರ್ಕಾರೀ ಶಾಲೆಯನ್ನು ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿಗಳವರು ದತ್ತಕ್ಕೆ ತೆಗೆದುಕೊಂಡು ಮುನ್ನಡೆಸುತ್ತಿದ್ದಾರೆ. ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶ್ರೀಗಳ ಮಾರ್ಗದರ್ಶನದಂತೆ ಮುನ್ನಡೆಯುತ್ತಿದ್ದಾರೆ.

ಕೂಡಲಿಯ ಶಾಲೆಯ ವಿದ್ಯಾರ್ಥಿಗಳು ಪ್ರಾಂತೀಯ ಫೂಟ್ ಬಾಲ್ ಪಂದ್ಯಾವಳಿಗೆ ಆಯ್ಕೆ ಆಗಿದ್ದರು, ಆದರೆ ಅವರ ಬಳಿ ಯೂನಿಫಾರ್ಮ್ ಕೊರತೆಯಿಂದ ಆಡಲು ಸಾಧ್ಯವಾಗಿರಲಿಲ್ಲ​. ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿಗಳಿಗೆ ವಿಷಯ ತಿಳಿದು ಕೂಡಲೇ ಮಕ್ಕಳಿಗೆ ಬೇಕಾದ ಉಡುಪಿನ ವ್ಯವಸ್ಥೆ ಮಾಡಿದರು.

ಆಗಸ್ಟ್ ೨೦೨೩.